Posts

Showing posts from April, 2017

ನಾದವಿರದ ಬದುಕೇ

ಸಾಹಿತ್ಯ: ಕೆ.ಎಸ್. ನಿಸಾರ್ ಅಹಮದ್ ಧ್ವನಿ: ಎಚ್ ಕೆ ನಾರಾಯಣ ನಾದವಿರದ ಬದುಕೇ ಉನ್ಮಾದ ಕೋರಬೇಡ ಈ ನೆಲದ ಜಲವ ಸವಿದು ರವಿ‌ ಕರುಣೆ ಬರೆಯಬೇಡ ಬಿಡುವಿರದ ದುಡಿತದಲ್ಲಿ ಬಲಿಯಾಗದಿರಲಿ ಬೆರಗು ಸುಡು ಬಾಳಿನಂಚ...

*ಎಲ್ಲಿ ಹೋದಿರಿ ನನ್ನ ತೊರೆದು ಹೀಗೆ*

ಸಾಹಿತ್ಯ: ಎಚ್ಚೆಸ್ ವೆಂಕಟೇಶಮೂರ್ತಿ ಧ್ವನಿ: ಎಸ್ ಪಿ ಬಾಲಸುಬ್ರಹ್ಮಣ್ಯಂ ಎಲ್ಲಿ ಹೋದಿರಿ ನನ್ನ ತೊರೆದು ಹೀಗೆ ಮರಳ ಹಾಸನು ತೊರೆದ ನದಿಯ ಹಾಗೆ ಕಣ್ಣ ಕುಡಿ ಮಿಂಚುಗಳೆ ಎಳೆ ನಗೆಯ ಹೊಂಚುಗಳೆ ಕುಣಿವ ಮೂಗಿ...

*ಯಾರು ಹೂಡಿದ ಆಟವೊ*

ಸಾಹಿತ್ಯ: ಎನ್ನೆಸ್ ಲಕ್ಷ್ಮೀನಾರಾಯಣ ಭಟ್ಟರು ಧ್ವನಿ: ರತ್ನಮಾಲಾ ಪ್ರಕಾಶ್, ಪುತ್ತೂರು ನರಸಿಂಹ ನಾಯಕ್ ಯಾರು ಹೂಡಿದ ಆಟವೋ? ಯಾರು ಮಾಡಿದ ಮಾಟವೋ? ಮಾಯೆಯೆಂಬ ಜಾಲ ಹೂಡಿ ತೆರೆದ ಭಾಗ್ಯದ ನೋಟವೋ? ಮೇಘದ ಹೂಮ...

🌸🌾🌸 *ಈ ಭಾವಗೀತೆ* 🌸🌾🌸

ಸಾಹಿತ್ಯ: ಪು.ತಿ. ನರಸಿಂಹಾಚಾರ್ ಧ್ವನಿ: ವೃಂದಗಾನ *ಓಡುವ ಬದುಕಿನ ಧಾವಂತವನ್ನು ಕವಿ ಬಲು ಸುಂದರವಾಗಿ ಕಟ್ಟಿಕೊಟ್ಟಿರುವ ಕವಿತೆ ಇದು* ಗಳಿಗೆ ಗಳಿಗೆಗೂ ಹೊಸ ಹೊಸ ರೀತಿಗೆ ಈ ಜಗವೋಡುತಿದೆ ಹಳತ ನೋಡಿ ತಾ ಕಿ...

ವ್ಯರ್ಥ್ಯವಲ್ಲವೆ....

ವ್ಯರ್ಥ್ಯವಲ್ಲವೆ ಜನ್ಮ ವ್ಯರ್ಥ್ಯವಲ್ಲವೆ||2|| ಅರ್ತಿಯಿಂದ ಹರಿಯ ನಾಮ ನಿತ್ಯ ಸ್ಮರಿಸದವನ ಜನ್ಮ||2||                                                            ||ವ್ಯರ್ಥ್ಯವಲ್ಲವೆ|| ಹರಿಯ ಸೇವೆ ...

*ಒಂದು ಮಣ್ಣಿನ ಜೀವ*

ಸಾಹಿತ್ಯ: ಎಚ್ಚೆಸ್ ವೆಂಕಟೇಶಮೂರ್ತಿ ಗಾಯನ: ಸಿ. ಅಶ್ವಥ್ ಒಂದು ಮಣ್ಣಿನ ಜೀವ ಎಂದೂ ಮಣ್ಣಿನಲ್ಲೇ ಉಳಿಯದು ಸಣ್ಣ ಸಸಿಯೇ ಬೆಳೆದು ಬೇರಿಗೆ ಪಾರಿಜಾತವ ಸುರಿವುದು ನೀರು ತುಂಬಿದ ಮಣ್ಣ ಪಾತಿಯೆ ಕಂದರಿಗೆ ಕದ...

ನೀ ಅಳುಕದಿರು ಗೆಳತಿ

ಕವಿದ ಕಾರ್ಮೋಡ ಕರಗಿದ ನಂತರ — ಮಳೆಹನಿಯು ಚುಂಬಿಸುವುದು ಈ ಭುವಿಗೆˌ ಕಗ್ಗತ್ತಲ ರಾತ್ರಿಯು ಕಳೆದ ನಂತರ — ಹೊಂಬೆಳಕು ಹಿತವೆನಿಸುವುದು ಈ ಮನಸ್ಸಿಗೆˌ ಸಹನೆಯೊಂದಿರಲಿ ನಿನ್ನೊಡನೆ — ನಾನರಿತಂತೆ ನೀ ಈಜಬಲ್ಲೆ ಈ ಪ್ರವಾಹದೆದುರಿಗೆˌ ಆ ಸೀತೆಗೂ ತಪ್ಪಲಿಲ್ಲ ಜೀವನದಿ ಅಗ್ನಿಪರೀಕ್ಷೆ — ನೀ ಅಳುಕದಿರು ಗೆಳತಿ ಈ ಪರೀಕ್ಷೆಗೆ....!!!!

ಓ ನನ್ನ ನಲ್ಲೆ

ಓ ನನ್ನ ನಲ್ಲೆ ನಗು ಮೊಗದ ಚಲುವೇ ನಿನ್ನ ಹೆಸರನ್ನು ಮನದಲಿ ಬರೆದೆ ನೀ ಮರೆತರು ಹೊದರು ಮರೆಯದೇ ನೀ ಮನದಲಿ ಉಳಿದೆ

"ಅಮ್ಮ"

ಅಮ್ಮನ ಪ್ರೀತಿಯ ಮಡಿಲು ಎಂದು ಬತ್ತದ ಕಡಲು ಅಮ್ಮ ನೀನೊಂದು ಆಶಾ ಕಿರಣ ಮುಗಿಸದಿರು ಎಂದು ಬಾಳಪಯಾಣ ಅಮ್ಮನ ಮನಸು ಸಾಗರ ಅದು ಎಂದು ಕಲಿಯಾಗದ ನೆನಪುಗಳ ಆಗರ ಅಮ್ಮ ನೀನೊಂದು ಅದ್ಭುತ ತಾಣ ಕೊಡುವೆ ನಿನಗೆ ಈ ನನ್ನ ಪ್ರಾಣ ಅಮ್ಮನ ಪ್ರೀತಿಯ ಬೆಸುಗೆ ಬ್ರಹ್ಮನು ಹಾಕಿದ ಗಂಟು ಎಂದು ಬಿಡಿಸಲಾಗದ ನಂಟು ನನ್ನ ಪ್ರೀತಿಯ ಅಮ್ಮ ಕೊಡುವೆನು ನಿನಗೊಂದು ಉಮ್ಮ                                                   ಪ್ರೀತಿಯ ಹುಡುಗ                                                    ಹಾಲಪ್ಪ ಮೇಟಿ

ರುಕ್ಕು

ರುಕ್ಕು ಲೆ ನನ್ನ ಪ್ರೀತಿಯ ರುಕ್ಕು ಕೊಡಬೆಡವೆ ಹಂಗೆ ಲುಕ್ಕು  ಅದ ನೊಡಿದ್ರೆ ನಂಗೊಂತರ ಕಿಕ್ಕು ನೀ ನನ್ನ ಜೊತೆಯಲ್ಲಿದ್ರೆ ಅದು ನನ್ ಲಕ್ಕು ಇಲ್ಲ ಅಂದ್ರೆ ನಾ ಹಿಡಿಯುವೆ ತುಕ್ಕು..... -- shankar B J

ಚೆಲುವೆ ಈ ನನ್ನ

ಚೆಲುವೆ ಈ ನನ್ನ ದೆಹಕ್ಕಿಲ್ಲ ಯಾವುದೆ ಭಯ  ಭಯ ಪಡುತಿರುವುದು ಈ ನನ್ನ ಹ್ರುದಯ  ಕಾರಣವಿಸ್ಟೆ ನೀನೆಂದರೆ ಈ ಹ್ರದಯಕೆ ಬಲು ಪ್ರಿಯ

ನಾನೀರುವೆ ಎದರದಿರು

ನಾನೀರುವೆ ಎದರದಿರು ನಾನೀರುವೆ ಎದರದಿರು ನಿನ್ನ ಮನದಾಳದಲ್ಲಿರುವೆ ಬಯವ ಬಿಡು ಅರಿಯದೆಯೆ ಬಯಪಡುವೆ ತಿಳಿಯದೆಯೆ ಕುಳಿತಿರುವೆ ನೋಡದೆಯೆ ನಡುಗಿರುವೆ ನಾನೀರುವೆ ಎದರದಿರು ಮನದಾಳದಲಿ ನಾ ನೆಲಸಿ ಬಯವ ನಿನ್ನಿಂದೋಡಿಸಿ ಗಟ್ಟಿ ಮಾಡುವೆ ನಿನ್ನ ಎದರದಿರುಮನವೇ

ಕನಸೇ ಓ ಕನಸೇ..

ಕನಸೇ ಓ ಕನಸೇ ನೀ ಕಣ್ಣಿಂದ ಮರೆಯಾದೆಯೇಕೆ... ಮನಸೇ ಓ ಮನಸೇ ನೀ ಮರೆಯಾದುದನ್ನೇ ಹುಡುಕುವೆಯೇಕೆ.. ನೆನಪೇ ಓ ನೆನಪೇ ನೀ ಪ್ರತಿ ಕ್ಷಣ ಕಾಡುವೆಯೇಕೆ.. ಕಂಬನಿಯೇ ಓ ಕಂಬನಿಯೇ ನೀ ಕಂಗಳಿಗೆ ಸಂಗಾತಿಯದೆಯೇಕೆ.. -- ರಂಜು

ಒಂದು ಮಾತನಾಡು..

ಒಂದು ಮಾತನಾಡು ಮೌನವಾಗುವ ಮೊದಲು.. ಒಮ್ಮೆ ತಿರುಗಿ ನೋಡು ಪ್ರೀತಿ ಮರೆವ ಮೊದಲು... ಒಂದು ಸಮ್ಮತಿ ನೀಡು ಹೃದಯ ನಿಲ್ಲುವ ಮೊದಲು.. ಜೀವ ನೀಡುವೆ ನಾನು ದೂರವಾಗುವ ಬದಲು... -- ರಂಜು

ಹೇಳಿ ಹೋಗು ಕಾರಣ. . . .

ಮನಸಿಲ್ಲದ ಮನಸು ಮಿಡಿತವಿಲ್ಲದ ಹೃದಯ ನೆನಪಿಲ್ಲದ ಬದುಕು ಸಂಗಾತಿಯಿಲ್ಲದ ಜೀವನ ನನ್ನದಾಗಿತ್ತು ಗೆಳತಿ. . . .  ಒಮ್ಮೆ ನೀ ಕೊಟ್ಟ ನಗು ನೀ ಸೆಳೆದ ಕಣ್ಣ ಬಿಂಬ ಸವರಿದ ತಂಗಾಳಿ ಬಳುಕುವಾ ನಡೆ ಎಲ್ಲವನೂ ಎಚ್ಚರಿಸಿತ್ತು ಗೆಳತಿ. . . ಅದೇನೋ ತವಕ ಪುಳಕ ನಿನ್ನ ನೋಡುವ ಕಣ್ಣ ಕಾಟ ಢವ ಢವ ಎದೆಯ ಬದಿತ ಪಿಸುಗುಡುವ ಮನಸ ಮಾತು ಕಾಡುತ್ತಲೇ ಇದೆ ನನ್ನ ಗೆಳತಿ. .  ಎದೆಯ ಹೊಲ ಉತ್ತು ಪ್ರೀತಿಯ ಬಿತ್ತು ನಿನಗೇನು ಬಂತು ಕುತ್ತು ಕಾಣದೇ ನಗೆಯ ಬೀರದೇ. .  ಪರಿಮಳ ಸೂಸದೇ ತಂಗಾಳಿ ಬೀಸದೇ. .  ಹೊರಟೆ ಎಲ್ಲಿಗೆ ಗೆಳತಿ ಹೇಳಿ ಹೋಗು ಕಾರಣ. . . . 

ಭಗ್ನ ಪ್ರೇಮಿಯ ಕನಸು

ಭಗ್ನ ಪ್ರೇಮಿಯ ಕನಸು ಮುಸ್ಸ೦ಜೆ ಬೆಳಕಿನಲಿ  ನಾ ಕ೦ಡ ಕನಸಿನಲಿ ಒಲಿದೊಲಿದು ಬ೦ದವಳು ನೀನೆ ದಿವ್ಯ ಬಾರದಿದ್ದರೂ ನಿನ್ನ ನೆನಪಿನಲೆ ನನ್ನ ಜೀವನವಿಹುದು ಭವ್ಯ ನಿನ್ನ ಜೊತೆಯಲ್ಲೆ ಸುತ್ತಿದೆ ನೀಲಾ೦ತರಿಕ್ಷ, ತಾರೆಗಳ ಲೋಕ ನೀ ಜೊತೆಯಲ್ಲಿರುವವರೆಗೂ ನಾ ಕ೦ಡಿದ್ದೆಲ್ಲ ನಾಕ ಕಡಲ ತಡಿಯ ವಾಸ ಭೊಗ೯ರೆವ ಜಲಪಾತ ನಿನ್ನ ಜೊತೆಯಲ್ಲೆ ನಾ ಕ೦ಡದ್ದು ಕನಸೇ, ಆಗಿತ್ತದೇ ನನ್ನ ಬಾಳಿನಾಸೆ .                       .................ಅನ೦ತ್ ಕಳಸಾಪುರ

ಕಳಸಾಪುರ

ನನ್ನೂರು ನಾ ಹುಟ್ಟಿದೂರು ಕಳಸಾಪುರ ಮಲೆನಾಡಿನ೦ಚಿನ ಬಯಲು ಸೀಮೆಯ ಉದರ ಇಲ್ಲು೦ಟ೦ತೆ ಯುರೆನಿಯಮ್ ಅದಿರು  ದಿಗಿಲು ಯೆಲ್ಲರಿಗು ಬಿಡಬೇಕಾದೀತು ಊರು ತೆ೦ಗು -ಕ೦ಗು ಬಾಳೆಗಳ ತೋಟ ರಾಗಿ-ಜೊಳ ಬೆಳೆದರೆ ಊಟ ವಷ೯ವಿಡಿ ಮಳೆರಾಯನ ಕಣ್ಣಾಮುಚ್ಹಾಲ ೆ  ಕೊಳುವೆ ಬಾವಿಗಳು ಮುಚ್ಹುತ್ತಿವೆ ಇತ್ತಿಚೆಗೆಸದ್ಯಕ್ಕ೦ತು ಯಾರೂ ಹೊರಟಿಲ್ಲ ಗುಳೆ ದೇವರ ದಯೆ ಹೇಗೊ ನೆಡೆಯುತಿದೆ ಬಾಳ್ವೆ   .................ಅನ೦ತ್ ಕಳಸಾಪುರ

ಯಾವುದು ಗಳಿಗೆ

ಅರಿವಿಗೂ ಅರಿಯದ ಅಮಲಲಿ ತೇಲುತಿದೆ ಏನೊ? ಮನಸು ಅಸಲಿಯೋ ನಕಲಿಯೋ ಅರಿಯೆನು ನಾ ಕಗ್ಗಂಟ ಬಿಡಿಸಿ ತಿಳಿಸು ಯಾವುದು ಕನಸು?, ಯಾವುದು ನನಸು ಒಮ್ಮೆ ಸ್ಪಷ್ಟ ಪಡಿಸು ನಾ ಅಲ್ಲಿ-ಇಲ್ಲಿ ಓಡುವ ಕೂಸು, ನೀ ತಳಿಸಿ-ತಣಿಸು||ಪ|| ಕ್ಷಮಿಸದಿರು ನನ್ನನು, ಮತ್ತೆ ಮಾಡುವ ಅದೇ ತಪ್ಪಿಗೆ ಚೇಳಿಸು ನೀ ಹಾಗೆಯೆ, ಕೊಡದೆ ನಾ ಬೇಡುವ ಒಪ್ಪಿಗೆ ಸುಮ್ಮನಿರಲು ಹೇಳು ನನ್ನ ನೋಡಿ ಮಿಟುಕುವ ಕಣ್ಣ ರೆಪ್ಪೆಗೆ ನೂಕಿದೆ ಏನು?, ಬಿಳಲು ನಾನು, ಪ್ರೀತಿಯ ಸುಂದರ ಬಲೆಗೆ ಬರುವುದಾದರು ಹೇಗೆ ಹೊರಗೆ?, ಇದ್ದು ಬಿಡುವೆ ಕಾಣದ ಹಾಗೆ||೧|| ತುಂಟ ಪೋಕರಿ ಒಳಗೆ, ಗೆಳತಿ ಬರುವ ಗಳಿಗೆ ಸಹಿಸಲಾಗದು ತರಲೆ, ಹೆಚ್ಚು ಕೊಡದಿರು ಸಲಿಗೆ ಮಾತು-ಮಾತಿಗಿಲ್ಲ ತೆರಿಗೆ, ಅವಳು ತಿರುಗಿ ನೋಡುವ ಪರಿಗೆ ಕೊಂದೆಯ ಏನು?, ಸಾಯಲು ನಾನು! ಓರೆ ನೋಟದ ಚೂಪು ಗುಂಡಿಗೆ ಬದುಕಲಾದರು ಸಾದ್ಯವು ಹೇಗೆ, ಇದ್ದು ಬಿಡುವೆ ಇರುವಾ ಹಾಗೆ||೨||  -- ಚಂದನ್ ಶರ್ಮ